Monday, 24 July 2017

ಮಳವಳ್ಳಿ ಶಾಸನ

ಮಳವಳ್ಳಿ ಶಾಸನದ ವಿಶೇಷತೆಗಳು..

ಶಿಕಾರಿಪುರ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿರುವ ಆರು ಮುಖದ ಕೆತ್ತನೆ ಹೊಂದಿರುವ ಸ್ಥಂಭ ಶಾಸನ ನಿಜಕ್ಕೂ ಹಲವು ವಿಶೇಷತೆಗಳನ್ನು ತನ್ನಲ್ಲಿ ಹೊತ್ತು ನಿಂತಿದೆ.

ಇದರಲ್ಲಿ ಎರಡು ಅವಧಿಯಲ್ಲಿ ಬದಲಾದ ಎರಡು ಸಾಮ್ರಾಜ್ಯದ ಇಬ್ಬರು ಅರಸರು ಶಾಸನ ಬರೆಸಿದ್ದಾರೆ.

#ಸುಮಾರು ಕ್ರಿ.ಶ 150 ರ ಅವಧಿಯಲ್ಲಿ ವೈಜಯಂತಿಪುರದ (ಬನವಾಸಿ) ರಾಜ ವಿಣ್ಣುಕುಡಚುಟುಕುಲಾನಂದ ಶಾತಕರ್ಣಿಯು ಸಹಲಾಟವಿ ಎಂಬ ಗ್ರಾಮವನ್ನು ಮಳವಳ್ಳಿ ಗ್ರಾಮದ ದೇವರಿಗೆ ದಾನ ನೀಡಿದ್ದಾನೆ, ಕೌಂಡಿನ್ಯ ಗೋತ್ರದ ಹಾರತೀ ಪುತ್ರನಾದ "ಕುಂದಮಾನ " ಎಂಬ ವಿಪ್ರನು ಈ ದಾನ ಸ್ವೀಕರಿಸಿದ್ದಾನೆ.

#ಈ ವಿವರನ್ನು ಸ್ಥಂಭ ಶಾಸನದ ಎರಡು ಮುಖಗಳಲ್ಲಿ ಮಾತ್ರ ಖಂಡರಿಸಲಾಗಿದೆ.

ಇಲ್ಲಿ ಬಳಸಿರುವ #ಮಹಾವಲ್ಲಭರಜ್ಜುಂಕ ಎಂಬ ಶಬ್ದದ ಉಲ್ಲೇಖ.ಇದು ಬಹಳ ವಿಶೇಷವಾಗಿದ್ದು ಕ್ರಿ.ಪೂ. ಅಶೋಕನ ಅವಧಿಯಲ್ಲಿನ ವಿಶೇಷ ಕಂದಾಯ ಅಧಿಕಾರಿಗಳು ಎಂಬುವುದನ್ನು ಸೂಚಿಸುತ್ತದೆ.

ಮೊದಲ ಬಾರಿಗೆ " # ಉಕ್ತಂ ಖಣ್ಡೋ ವಿಶ್ವಕಮ್ಮಾ " ಎಂಬ ಪದದ ಉಲ್ಲೇಖವು ವಿಶೇಷವಾಗಿದೆ. ಸುಮಾರು ಒಂದು ಸಾವಿರದ ಎಂಟನೂರು ವರುಷಗಳ ಹಿಂದೆ "ವಿಶ್ವಕರ್ಮ " ಎಂಬ ಪದದ ಉಲ್ಲೇಖ ಗಮನ ಸೆಳೆಯುತ್ತದೆ.

 ಶ್ರೀಯುತ ಷ. ಶೆಟ್ಟರ್ ರವರ ಪ್ರಕಾರ "ವಿಶ್ವಕರ್ಮ " ಎಂಬ ಪದದ ಬಳಕೆಯು ಒಂದು ಹೊಸ ಮೈಲಿಗಲ್ಲು. ಪ್ರಾಚೀನರ    ಬ್ರಾಹ್ಮೀ -ಪಾಕೃತ ಮಾಧ್ಯಮದಿಂದ ಹೊರಬರಲು ಭಾಷೆ ಮತ್ತು ಲಿಪಿ ಪ್ರಾರಂಭಿಸಿದ ಹೆಗ್ಗರುತು ಇದಾಗಿದೆ.

ಸುಮಾರು ಕ್ರಿ.ಶ 250-300 ರ ಅವಧಿಯಲ್ಲಿ ಬನವಾಸಿ ರಾಜ್ಯವನ್ನು ಕದಂಬರ "ಶಿವ..ವರ್ಮ" ಎಂಬ ರಾಜನು ಆಳುತ್ತಿದ್ದು ಆತನು ಮಾನವ್ಯಗೋತ್ರದ ಹಾರತೀ ಪುತ್ರನಾಗಿದ್ದು ಮಳವಳ್ಳಿ ಗ್ರಾಮದ ಕೌಂಡಿನ್ಯ ಗೋತ್ರದ ಕೌಸಕೀ ಪುತ್ರನಾದ ಕುಂದಮಾನ ವಂಶದ ನಾಗದತ್ತ ಎಂಬ ವಿಪ್ರನಿಗೆ ಹಿಂದೆ ವಿಣ್ಣುಕುಡಚುಟುಕುಲಾನಂದ ನೀಡಿದ್ದ ಸಹಲಾ ಗ್ರಾಮದ ಜೊತೆ ಇನ್ನೂ ಹಲವು ಗ್ರಾಮಗಳನ್ನೂ ಸಹ ದಾನ ನೀಡಲಾಗಿದೆ.

ಇಲ್ಲಿ "ಶಿವ...ವರ್ಮ" ಕದಂಬರ ರಾಜ ಎನ್ನಲಾಗಿದ್ದು ಮಾನವ್ಯಗೋತ್ರದ ಹಾರತೀ ಪುತ್ರ ಎಂದು ಪ್ರಸ್ತಾಪಿಸಲಾಗಿದೆ. ಇತ್ತೀಚಿಗೆ "ಶಿವ...ವರ್ಮ" ''ಮಯೂರವರ್ಮ " ಎಂಬುದಾಗಿ ವಿಶ್ಲೇಷಿಸಲಾಗಿದೆ.

#ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿಣ್ಣುಕುಡಚುಟುಕುಲಾನಂದ ದೊರೆ ಹಾಗೂ ಮಯೂರ ಇಬ್ಬರೂ ಮಾನವ್ಯಗೋತ್ರದ ಹಾರತೀ ಪುತ್ರರಾಗಿದ್ದಾರೆ.

#ಇಬ್ಬರೂ  "ಕುಂದಮಾನ" ವಂಶದ ಬ್ರಾಹ್ಮಣರಿಗೇ ದಾನ ನೀಡಿದ್ದಾರೆ.

#ವಿಣ್ಣುಕುಡಚುಟುಕುಲಾನಂದನ ಮೊದಲ ಶಾಸನ ಸ್ಥಂಭದಲ್ಲೇ ಇನ್ನೆರೆಡು ಮುಖಗಳಲ್ಲಿ ಮಯೂರನೂ ಶಾಸನ ಕೆತ್ತಿಸಿದ್ದಾನೆ.

#ಒಂದೇ ಶಾಸನ ಕಲ್ಲಿನಲ್ಲಿ ಇಬ್ಬರು ರಾಜರು ಶಾಸನ ಕೆತ್ತಿಸಿರಲು ಕಾರಣ ಏನಿರಬಹುದು?

ಎರಡೂ ಸಮಯದಲ್ಲಿ ಪ್ರಸ್ತಾಪವಾಗುತ್ತಿರುವ  "ಸಹಲಾ'' ಎಂಬ ಗ್ರಾಮವು ಈಗಿನ ತಡಗಣಿ ಎಂದು ಹಲವು ಇತಿಹಾಸಕಾರರ ಅಭಿಪ್ರಾಯ. ಅದಕ್ಕೆ ಕಾರಣ ತಡಗಣಿ ಗ್ರಾಮದ ಶಾಸನದಲ್ಲಿ "ಶ್ರೀಮದುವರ್ಮ್ಮಾಶತೋಮಹಿಲಗ್ರಾಮ'' ಎಂಬ ಉಲ್ಲೇಖ.

# ಈ ಶಾಸನದಲ್ಲಿ ಉಲ್ಲೇಖಿತ ಇತರ ಗ್ರಾಮಗಳೆಂದರೆ:

ಸೋಮಪಟ್ಟಿ, (ಸೋಮನಹಳ್ಳಿ ?)
ಕೊಂಗಿಣಿಗಾರಂ (ಕೋಲ್ಗುಣಿಸಿ?)
ಮರಿಯಸ (?)
ಕರಿಪೆನ್ದೂಲ ( ಕರಿನೆಲೆ - ಕರ್ನಲ್ಲಿ)
ಪರ ಮುಚ್ಚುಣ್ಡೀ ( ಅಗ್ರಹಾರ ಮುಚಡಿ)
ಕುನ್ದ ಮುಚ್ಚುಣ್ಡೀ (ಮಾಯಿ ತಮ್ಮನ ಮುಚಡಿ)
ಕಪ್ಪೆನಾಲ (ಕುಪ್ಪೆಲೂರು)
ಕುನ್ದತಪುರಂ (ಸ್ಥಾನ ಕುಂದಪುರ-ತಾಳಗುಂದ)
ವೆಟ್ಟಕ್ಕಿ (?)
ವೇಗೂರಂ (ಬೇಗೂರು)
ಕೊಣತಪುಕಂ (ಕುಣೆತೆಪ್ಪ)
ಎಕ್ಕದ್ಧಾಹಾರಂ  (?)

EC - VII -sk -264

" ರಮೇಶ ಬಿ ಹಿರೇಜಂಬೂರು"

1 comment:

  1. ಸಮಗ್ರ ಮಾಹಿತಿ ಒದಗಿಸಿದ್ದೀರಿ, ಧನ್ಯವಾದಗಳು.(ಇತ್ತೀಚೆಗೆ ನೋಡಿದೆ).

    ReplyDelete