ಸುಮಾರು 98 ಸಾಲಿನ ಬೃಹತ್ ಶಾಸನ ...
ಕ್ರಿ.ಶ 1160ರ ಅವಧಿಯ "ಕೇಶವ ದಂಡನಾಯಕನ " ಶಾಸನವಿದು. ರೇಚರಸನ ಧರ್ಮ ಪ್ರಸಂಗದಿಂದಾಗಿ ತಾಳಗುಂದದ ಪಂಚ ತೀರ್ಥದ ಸನ್ನಿದಾನದಲ್ಲಿ "ಭೂದಾನ , ವಿದ್ಯಾದಾನ ಮತ್ತು ಅನ್ನದಾನಗಳ ಮಹತ್ವ ತಿಳಿಸಿ, ಆ ವಿಧವಾದ ಧಾನಗಳನ್ನು ಪರಿಪರಿಯಾಗಿ ವಿವರಿಸುತ್ತಾ ನೀಡಿದ " ದಾನ ಕೃತಿ ಈ ಶಾಸನ.
ತಾಳಗುಂದದ ನೆಲದ ಪವಿತ್ರತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾ.. ಇಲ್ಲಿನ ಪಕ್ಷಿ ಸಂಕಲುಗಳೂ ಅಂದು ಶ್ಲೋಕಗಳನ್ನ ಕಲಿತಿದ್ದವು.... ಅವುಗಳೂ ಪಠಿಸುತ್ತಿದ್ದ ಮಾಹಿತಿ ತಿಳಿಸುತ್ತದೆ.
ದೇವರ ಅಭಿಶೇಕವನ್ನು ಹೇಗೆ ಮಾಡಬೇಕೆಂಬ ವಿವರಣೆ ಈ ಶಾಸನದಲ್ಲಿದೆ. ಕಳಸ ಪ್ರತಿಷ್ಟಾಪನೆ , ಅವುಗಳಲ್ಲಿ ತುಂಬಬೇಕಾದ ದ್ರವ, ದ್ರವ್ಯಗಳು, ಅವುಗಳ ಪೂಜಾ ವಿಧಾನ
ಮೆರವಣಿಗೆ , ಆ ಸಮಯದಿ ಘಂಟಾ ಘೋಷಗಳು, ನಂತರ ಪ್ರಸಾದ. ಪ್ರಸಾದವನ್ನು ಹೇಗೆ ತಯಾರಿಸಬೇಕು , ಪ್ರಸಾದಕ್ಕೆ ಯಾವ ಯಾವ ಪದಾರ್ಥಗಳನ್ನು ಉಪಯೋಗಿಸಬೇಕೆಂಬುದರ ಉಲ್ಲೇಖಗಳು ಇವೆ.
12ನೇ ಶತಮಾನದಲ್ಲಿ ತಾಳಗುಂದದಲ್ಲಿದ್ದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುವ ಈ ಶಾಸನ
ಇಲ್ಲಿನ ವಿವಿಧ ಅಧ್ಯಯನ ವಿಷಯಗಳ ಖಂಡಿಕೋಪಾಧ್ಯಯರ ವಿವರಣೆ ನೀಡುತ್ತದೆ. ಆ ವೇಳೆಯಲ್ಲಿ ತಾಳಗುಂದದಲ್ಲಿ " ಕನ್ನಡ ಅಕ್ಕರ ಶಿಕ್ಷಣ " ಇದ್ದು , ಅದಕ್ಕಾಗಿಯೇ ಪ್ರತ್ಯೇಕವಾಗಿ ಒಬ್ಬ ಕನ್ನಡದ ಉಪಾಧ್ಯಾಯ ಇದ್ದುದಾಗಿ ಮಾಹಿತಿ ನೀಡುತ್ತದೆ.
ಇಲ್ಲಿನ ಶಿಕ್ಷಣಾರ್ಥಿಗಳಿಗೆ ಹಾಗೂ ಖಂಡಿಕೊಪಾಧ್ಯಾರಿಗೆ ಅಡುಗೆ ಮಾಡಲು , ತಾಂಬೂಲ ತಿನಿಸಲು, ಅವರ ಉಗುರುಗಳನ್ನು ತೆಗೆಯಲು " ಪ್ರತ್ಯೆಕ " ಸೇವಕರಿರುವುದನ್ನು
ಸೂಚಿಸುತ್ತದೆ.
ಕ್ರಿ.ಶ 1160ರ ಅವಧಿಯ "ಕೇಶವ ದಂಡನಾಯಕನ " ಶಾಸನವಿದು. ರೇಚರಸನ ಧರ್ಮ ಪ್ರಸಂಗದಿಂದಾಗಿ ತಾಳಗುಂದದ ಪಂಚ ತೀರ್ಥದ ಸನ್ನಿದಾನದಲ್ಲಿ "ಭೂದಾನ , ವಿದ್ಯಾದಾನ ಮತ್ತು ಅನ್ನದಾನಗಳ ಮಹತ್ವ ತಿಳಿಸಿ, ಆ ವಿಧವಾದ ಧಾನಗಳನ್ನು ಪರಿಪರಿಯಾಗಿ ವಿವರಿಸುತ್ತಾ ನೀಡಿದ " ದಾನ ಕೃತಿ ಈ ಶಾಸನ.
ತಾಳಗುಂದದ ನೆಲದ ಪವಿತ್ರತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾ.. ಇಲ್ಲಿನ ಪಕ್ಷಿ ಸಂಕಲುಗಳೂ ಅಂದು ಶ್ಲೋಕಗಳನ್ನ ಕಲಿತಿದ್ದವು.... ಅವುಗಳೂ ಪಠಿಸುತ್ತಿದ್ದ ಮಾಹಿತಿ ತಿಳಿಸುತ್ತದೆ.
ದೇವರ ಅಭಿಶೇಕವನ್ನು ಹೇಗೆ ಮಾಡಬೇಕೆಂಬ ವಿವರಣೆ ಈ ಶಾಸನದಲ್ಲಿದೆ. ಕಳಸ ಪ್ರತಿಷ್ಟಾಪನೆ , ಅವುಗಳಲ್ಲಿ ತುಂಬಬೇಕಾದ ದ್ರವ, ದ್ರವ್ಯಗಳು, ಅವುಗಳ ಪೂಜಾ ವಿಧಾನ
ಮೆರವಣಿಗೆ , ಆ ಸಮಯದಿ ಘಂಟಾ ಘೋಷಗಳು, ನಂತರ ಪ್ರಸಾದ. ಪ್ರಸಾದವನ್ನು ಹೇಗೆ ತಯಾರಿಸಬೇಕು , ಪ್ರಸಾದಕ್ಕೆ ಯಾವ ಯಾವ ಪದಾರ್ಥಗಳನ್ನು ಉಪಯೋಗಿಸಬೇಕೆಂಬುದರ ಉಲ್ಲೇಖಗಳು ಇವೆ.
12ನೇ ಶತಮಾನದಲ್ಲಿ ತಾಳಗುಂದದಲ್ಲಿದ್ದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುವ ಈ ಶಾಸನ
ಇಲ್ಲಿನ ವಿವಿಧ ಅಧ್ಯಯನ ವಿಷಯಗಳ ಖಂಡಿಕೋಪಾಧ್ಯಯರ ವಿವರಣೆ ನೀಡುತ್ತದೆ. ಆ ವೇಳೆಯಲ್ಲಿ ತಾಳಗುಂದದಲ್ಲಿ " ಕನ್ನಡ ಅಕ್ಕರ ಶಿಕ್ಷಣ " ಇದ್ದು , ಅದಕ್ಕಾಗಿಯೇ ಪ್ರತ್ಯೇಕವಾಗಿ ಒಬ್ಬ ಕನ್ನಡದ ಉಪಾಧ್ಯಾಯ ಇದ್ದುದಾಗಿ ಮಾಹಿತಿ ನೀಡುತ್ತದೆ.
ಇಲ್ಲಿನ ಶಿಕ್ಷಣಾರ್ಥಿಗಳಿಗೆ ಹಾಗೂ ಖಂಡಿಕೊಪಾಧ್ಯಾರಿಗೆ ಅಡುಗೆ ಮಾಡಲು , ತಾಂಬೂಲ ತಿನಿಸಲು, ಅವರ ಉಗುರುಗಳನ್ನು ತೆಗೆಯಲು " ಪ್ರತ್ಯೆಕ " ಸೇವಕರಿರುವುದನ್ನು
ಸೂಚಿಸುತ್ತದೆ.
No comments:
Post a Comment